Monday, May 3, 2010

ಇಜ್ಜೋಡು ನೋಡು , ವಿಲ ವಿಲ ಒದ್ದಾಡು


ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೇ ಹರನೇತ್ರ ವಹ್ನಿಯೋಲಡಬಳವ ಸುಡುಬಗೆದೆಲಾ , ಹೆಡೆತಲೆಯ ತುರಿಸುವರೆ ಹಾವಿನ ಪಡೆಯನಕಟ (ಸಿಡಿಲ ಪೊಟ್ಟಣಕಟ್ಟಿ ಶಾಕವನು ಯಾರಾದರೂ ಕೊಡುವರೇ , ಹರನೇತ್ರದ ಬೆಂಕಿಯಲ್ಲಿ ಮಾಮ್ಸವಸುಡಲಾದೀತೇ ಹಾವಿನಹೆಡೆಯಿಂದ ತಲೆಯ ತುರಿಸಿಕೊಳ್ಳಲು ಸಾಧ್ಯವೇ ) ಇವು ಯಾರು ಮಾಡಲು ಧೈರ್ಯವ ತೋರದಂತ ವಿಚಾರಗಳು . ಪ್ರಾಯಶಃ ಕುಮಾರವ್ಯಾಸ ಇಜ್ಜೋಡು ಚಲನಚಿತ್ರ ನೋಡಿದ್ದರೆ , ಇಜ್ಜೋಡನೀಕ್ಷಿಸಿ ಬೆಪ್ಪರಾಗದವರಿರ್ವರೆ ! ಎಂದು ಸೇರಿಸುತ್ತಿದ್ದನೇನೋ . ಏಕೆಂದರೆ ಎಂ .ಎಸ್. ಸತ್ಯು ನಿರ್ದೇಶನದ ಇಜ್ಜೋಡು ಚಲನಚಿತ್ರವ ವೀಕ್ಷಿಸುವವರೂ ಮಾಡುವುದು ಮೇಲೆ ತಿಳಿಸಿರುವಂತ ಮೂರ್ಖ ಕೆಲಸಗಳನ್ನು ಮಾಡಿದಂತಯೇ . ೯೦ ನಿಮಿಷದ ಸಿನಿಮಾ ಮುಗಿಯುವ ಹೊತ್ತಿಗೆ ೯೦ ಮನ್ವಂತರಗಳ ದಾಟಿ ಹೊರಬಂದಂತಹ ಅನುಭವ ನೀಡುತ್ತದೆ . ತೀರ ಕಳಪೆ ಚಿತ್ರಕಥೆ , ಮನಸ್ಸನ್ನು ಮುಟ್ಟದ ಸಂಭಾಷಣೆ , ಹೊಗಳಲು ಯೋಗ್ಯವಲ್ಲದ ಛಾಯಾಗ್ರಹರಣ , ಅನಗತ್ಯ ,ಅಸಂಬದ್ಧ , ಹಾಡು ಇದು ಚಿತ್ರದ highlights . ಫಿಲಂ ಫೇರ್ , ಪದ್ಮಶ್ರಿ ದಂತಹ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನಿರ್ದೇಶಕ ಇಂತ ಚಿತ್ರವನ್ನೂ ನಿರ್ದೇಶಿಸಿದ್ದಾರೆ ಎಂದು ನನಗೆ ನಂಬಲೂ ಸಾಧ್ಯವಾಗುತ್ತಿಲ್ಲ . ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಧಾರಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ . ಮೀರಾ ಜಾಸ್ಮಿನ್ ಳಿಗೆ ಕನ್ನಡ ಬಾರದಿದ್ದರೂ ಆಕೆಯೇ ಡಬ್ ಮಾಡಿರುವುದು ಶ್ಲಾಘನೀಯವಾದ ವಿಷಯವೇ . ತನ್ನ ಪಾತ್ರಕ್ಕೆ ಆಕೆಯಾಗಲಿ , ಅನಿರುದ್ , ರಾಮಕೃಷ್ಣ ಆಗಲಿ ಯಾವುದೇ ಮೋಸ ಮಾಡಿಲ್ಲ . ಚಿತ್ರದ ಪ್ರಾರಂಭದಲ್ಲಿ ಬರುವ "ಸಮರ" ಎಂಬ ಹಾಡಿನ ಹಿನ್ನಲೆಯ ಕುರೂಪ ನೃತ್ಯ , ಮಂಡ್ಯ ರಮೇಶರ ಪಾತ್ರದ ಮೂಢತನದ ಪ್ರದರ್ಶನದ ಅಗತ್ಯವನ್ನು ಆ "ಸತ್ಯ"ನಾರಾಯಣನೆ ಬಲ್ಲ . ಚಿತ್ರದ ಕಥೆಯು ಅಜ್ಜಂಪುರ ಸೀತಾರಾಮ ರವರ ಸಣ್ಣಕತೆಯಾದ "ನಾನು ಕೊಂದ ಹುಡುಗಿ " ಯನ್ನು ಶೇಕಡ ೮೫ ರಷ್ಟು ಹೋಲುತ್ತದೆ , ಚಿತ್ರದ ಕತೆಯು ಅದರಿಂದ ಪ್ರೇರಿತವಾಗಿದೆಯೋ ಇಲ್ಲವೋ ನನಗೆ ತಿಳಿಯದು , ಏಕೆಂದರೆ title card ನೋಡಲಾಗಲಿಲ್ಲ . ಇಷ್ಟೆಲ್ಲಾ ಕೇಳಿಯೂ ಯಾರಾದರೂ ಚಿತ್ರಮಂದಿರಕ್ಕೆ ಹೋದರೆ ಅವರು ಎಂಟೆದೆಯ ಭಂಟರೆ ಸೈ! . ಆದರೆ ಕಲಾತ್ಮಕ ಚಿತ್ರ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಕಾರಣ ಇದಕ್ಕೆ ರಾಜ್ಯ ಪ್ರಶಸ್ತಿ ಬಂದರೂ ಅನುಮಾನವಿಲ್ಲ . ಪ್ರಶಸ್ತಿ ಬಂದರು ಬರದಿದ್ದರು ನನಗೆ ಬೇಜಾರಿಲ್ಲ . But i need my ticket money back........ ಶಶಾಂಕ್ .ಮ .ಅ

No comments:

Post a Comment